ಶುಕ್ರವಾರ, ಮಾರ್ಚ್ 22, 2013

ಇಂದು ಜನಸಾಹಿತ್ಯ ಸಮಾವೇಶ

 
 
 
ಧಾರವಾಡ: ಇಂದು ಕರ್ನಾಟಕ ವಿದ್ಯಾವರ್ಧಕ ಸಂಘ, ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಬಹು ನಿರೀಕ್ಷಿತ ಕರ್ನಾಟಕ ಜನಸಾಹಿತ್ಯ ಸಮಾವೇಶ ನಡೆಯಲಿದೆ. ಬೆಳಗ್ಗೆ ೧೦.೩೦ ಕ್ಕೆ ಆರಂಭವಾಗುವ ಈ ಸಮಾವೇಶದಲ್ಲಿ ಡಾ.ಎಂ.ಡಿ. ವಕ್ಕುಂದ ಅವರು ಪ್ರಾಸ್ತಾವಿಕ ಮಾತುಗಳನ್ನು ಆಡಲಿದ್ದಾರೆ. ಮರಾಠಿಯ ಪ್ರಸಿದ್ಧ ದಲಿತ ಲೇಖಕರಾದ ಲಕ್ಷಣ್ ಗಾಯಕವಾಡ ಅವರು ಆಶಯ ಭಾಷಣ ಮಾಡಲಿದ್ದಾರೆ. ಹಾಸನದ ಲೇಖಕಿ ಬಾನು ಮಷ್ತಾಕ್ ಮತ್ತು ಜಿ. ರಾಮಕೃಷ್ಣ ಅವರು ಆಶಯದ ಮಾತುಗಳನ್ನು ವಿಸ್ತರಿಸಲಿದ್ದಾರೆ. ಡಾ. ಸಂಜೀವ ಕುಲಕರ್ಣಿ ಅವರು ಈ ಗೋಷ್ಠಿಯನ್ನು ಸಂಯೋಜಿಸುತ್ತಾರೆ.

   ಮಧ್ಯಾನ ೧೨ ರಿಂದ ೨ ತನಕ ‘ವರ್ತಮಾನದ ಬಿಕ್ಕಟ್ಟು:ವಿವಿಧ ನೋಟಗಳು’ ಕುರಿತಂತೆ ದು.ಸರಸ್ವತಿ, ಡಾ.ನಾಗೇಶ್  ಹೆಗಡೆ, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಎಸ್.ಬಿ.ಜೋಗೂರ ಅವರು ಬೇರೆ ಬೇರೆ ನೆಲೆಗಳಿಂದ ಮಾತನಾಡಲಿದ್ದಾರೆ. ಪ್ರಸಿದ್ಧ ರಾಜಕೀಯಾರ್ಥಿಕ ಚಿಂತಕರಾದ ಡಾ.ಮುಜಾಫರ್ ಅಸ್ಸಾದಿ ಅವರು ಸ್ಪಂದನದ ಮಾತುಗಳನ್ನು ಆಡಲಿದ್ದಾರೆ. ಈ ಗೋಷ್ಠಿಯನ್ನು ಡಾ.ಜಗದೀಶ್ ಕೊಪ್ಪ ಅವರು ಸಂಯೋಜನೆ ಮಾಡಲಿದ್ದಾರೆ.
 ಮಧ್ಯಾನ ೩ ರಿಂದ ೫.೨೦ ರ ತನಕ ‘ಸಮಾಜ ಮತ್ತು ನನ್ನ ಬರಹ’ ಎಂಬ ವಿಷಯವಾಗಿ ಕರ್ನಾಟಕದ ಬೇರೆ ಬೇರೆ ಪ್ರದೇಶದ ಯುವ ಬರಹಗಾರರಾದ ಸರ್ಜಾಶಂಕರ್ ಹರಳಿಮಠ, ಬಿ.ಪೀರ್‌ಬಾಷಾ, ವೀರಣ್ಣ ಮಡಿವಾಳರ, ಡಾ.ಅನಸೂಯ ಕಾಂಬಳೆ, ವಸಂತ ಬನ್ನಾಡಿ, ಡಾ.ಮಲ್ಲಿಕಾರ್ಜುನ ಮೇಟಿ, ಟಿ.ಕೆ.ದಯಾನಂದ, ಬಾಲ ಗುರುಮೂರ್ತಿ, ರಮೇಶ್ ಅರೋಲಿ ತಮ್ಮ ತಮ್ಮ ಬರಹದ ನೆಲೆಗಳಿಂದ ಮಾತನಾಡಲಿದ್ದಾರೆ. ಈ ಗೋಷ್ಠಿಯನ್ನು ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಅವರು ಸಂಯೋಜನೆ ಮಾಡಲಿದ್ದಾರೆ.
   ಸಂಜೆ ೫.೩೦ ರಿಂದ ೮ ರ ತನಕ ನಾಡಿನ ೩೮ ಯುವ ಕವಿ ಕವಯಿತ್ರಿಯರು ತಮ್ಮ ಕವನಗಳನ್ನು ವಾಚಿಸಲಿದ್ದಾರೆ. ಈ ಗೋಷ್ಠಿಯಲ್ಲಿ ಪ್ರಸಿದ್ಧ ಕವಿ ಡಾ.ಎಸ್.ಜಿ.ಸಿದ್ಧರಾಮಯ್ಯ ಅವರು ಸ್ಪಂದನೆ ನೀಡಲಿದ್ದಾರೆ. ಡಾ.ಅಶೋಕ ಶೆಟ್ಟರ್ ಅವರು ಈ ಗೋಷ್ಠಿಯ ಸಂಯೋಜನೆ ಮಾಡಲಿದ್ದಾರೆ.
ರಾತ್ರಿ ೮ ಕ್ಕೆ ಜನಾರ್ಧನ್ ಜನ್ನಿ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಚಾಲನೆ ನಡೆಯುತ್ತದೆ. ಕೇಸರಿ ಹರವೂ ನಿರ್ದೇಶನದ ‘ನಗರ ಮತ್ತು ನದೀ ಕಣಿವೆ’ ಸಾಕ್ಷ್ಯಚಿತ್ರ ಪ್ರದರ್ಶನವಿದೆ.
ನಂತರ ಸತೀಶ ಶಿವಪ್ಪನವರ ಹಾಗೂ ಸಂಗಡಿಗರ ತತ್ವಪದ, ಇಪ್ಟಾ, ಸಮುದಾಯ ಕಲಾವಿದರಿಂದ ಹಾಡುಗಾರಿಕೆ ಇದೆ.
 
ಈ ಸಮಾವೇಶಕ್ಕೆ ವಿಧ್ಯಾರ್ಥಿಗಳಿಗೆ, ಸಂಶೋಧಕರಿಗೆ, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಆಸಕ್ತ ವಿದ್ವಾಂಸರು, ಸಾಹಿತಿಗಳು, ಹಿರಿಯರು ಈ ಕಾರ್ಯಕ್ರಮಕ್ಕೆ ಭಾಗವಹಿಸಬೇಕೆಂದು ಸಂಘಟಕರು ಕೋರಿದ್ದಾರೆ.

ಗುರುವಾರ, ಮಾರ್ಚ್ 14, 2013

ಕರ್ನಾಟಕ ಜನಸಾಹಿತ್ಯ ಸಮಾವೇಶ-ಆಹ್ವಾನ ಪತ್ರಿಕೆ


ಕರ್ನಾಟಕ ಜನಸಾಹಿತ್ಯ ಸಮಾವೇಶ

ಮಾರ್ಚ್ ೨೩ ಮತ್ತು ೨೪, ೨೦೧೩.
ಪಾಟೀಲ ಪುಟ್ಟಪ್ಪ ಸಭಾಭವನ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

ಮಾ.೨೩. ಬೆ. ೧೦.೩೦-೧೧.೩೦:

೧. ಆಶಯ ನುಡಿ

ಪ್ರಸ್ತಾವನೆ : ಡಾ. ಎಂ ಡಿ ಒಕ್ಕುಂದ
ಆಶಯ ಮಾತು :
ಲಕ್ಷ್ಮಣ  ಗಾಯಕವಾಡ, ಮರಾಠಿ ದಲಿತ ಲೇಖಕರು
ಬಾನು ಮುಷ್ತಾಕ್,
ಸಂಯೋಜನೆ: ಡಾ. ಸಂಜೀವ ಕುಲಕರ್ಣಿ


೨. ವರ್ತಮಾನದ ಬಿಕ್ಕಟ್ಟು; ವಿವಿಧ ನೋಟಗಳು ೧೧.೩೦-೨.೦೦

ದು. ಸರಸ್ವತಿ
ಡಾ. ನಾಗೇಶ ಹೆಗಡೆ
ಡಾ. ಬಂಜಗೆರೆ ಜಯಪ್ರಕಾಶ
ಡಾ. ಎಸ್.ಬಿ.ಜೋಗುರ
ಸ್ಪಂದನ : ಡಾ. ಮುಜಾಫರ್ ಅಸ್ಸಾದಿ
ಸಂಯೋಜನೆ : ಡಾ. ಜಗದೀಶ ಕೊಪ್ಪ


೩. ಸಮಾಜ ಮತ್ತು  ನನ್ನ ಬರಹ   ಮ. ೩.೦೦ - ೫.೦೦
ಸರ್ಜಾಶಂಕರ್ ಹರಳಿಮಠ
ಬಿ.ಪೀರ್‌ಬಾಷಾ
ವೀರಣ್ಣ ಮಡಿವಾಳರ
ಡಾ. ಅನಸೂಯಾ ಕಾಂಬಳೆ
ವಸಂತ ಬನ್ನಾಡಿ
ಜ್ಯೋತಿ ಚೇಳಾಯರು
ಡಾ. ಮಲ್ಲಿಕಾರ್ಜುನ ಮೇಟಿ
ಟಿ ಕೆ ದಯಾನಂದ
ಬಾಲ ಗುರುಮೂರ್ತಿ
ರಮೇಶ ಅರೋಲಿ


ಸ್ಪಂದನ : ಡಾ. ಕುಂ. ವೀರಭದ್ರಪ್ಪ
ಸಂಯೋಜನೆ : ಡಾ. ಕಾ. ವೆಂ. ಶ್ರೀನಿವಾಸಮೂರ್ತಿ


೪. ಕವಿಗೋಷ್ಠಿ  ಸಂಜೆ ೫.೩೦ - ೮.೦೦

ಸುಬ್ಬು ಹೊಲೆಯಾರ್
ವಿ. ಎಂ. ಮಂಜುನಾಥ
ವಿ. ಆರ್. ಕಾರ್ಪೆಂಟರ್
ಡಾ. ಅರುಣ ಜೋಳದ ಕೂಡ್ಲಿಗಿ
ಪ್ರವರ ಕೊಟ್ಟೂರ
ಶರೀಫ್ ಹಸಮಕಲ್
ಸ್ಮಿತಾ ಮಾಕಳ್ಳಿ
ಸೈಫ್ ಜಾನ್ಸೆ ಕೊಟ್ಟೂರು
ಸೀಮಾ ಸಮತಳ
ಕಾವ್ಯ. ಪಿ. ಕೆ
ಗಂಗಪ್ಪ ತಳವಾರ
ಬಸವರಾಜ ಹಳ್ಳಿ
ಹೃದಯಶಿವ
ಸತ್ಯಮಂಗ ಮಹಾದೇವ
ವಿ. ಹರಿನಾಥ ಬಾಬು
ಗಣೇಶ್ ಹೊಸ್ಮನೆ
ಭವ್ಯ. ಎಚ್. ಸಿ
ಕಾವ್ಯಶ್ರೀ
ಟಿ. ಎಸ್. ಗೊರವರ
ಚೈತ್ರ ಬೇವಿನಗಿಡದ
ಕುಂಸಿ ಉಮೇಶ
ಅಬ್ಬಾಸ ಮೇಲಿನಮನಿ
ಮಂಜುನಾಥ ಡೊಳ್ಳಿನ
ಬಿ. ಶ್ರೀನಿವಾಸ
ಶ್ರೀದೇವಿ ಕಳಸದ
ಬಸವರಾಜ ಹೂಗಾರ
ಕೆ. ಅಕ್ಷತಾ
ಮಂಜುಳಾ ಮಾದರ
ಶಿವಕುಮಾರ ಕಂಪ್ಲಿ
ದೊಡ್ಡನಿಂಗಪ್ಪ ಆಲೂರ್
ಡಿ. ಕೆ. ರಮೇಶ್
ಕುಮಾರ್. ಎಸ್
ಕಲ್ಲೇಶ್ ಕುಂಬಾರ
ಚನ್ನಪ್ಪ ಅಂಗಡಿ
ಅಪ್ಪಗೆರೆ ಸೋಮಶೇಖರ್
ನಾಗರಾಜ ಹರಪನಹಳ್ಳಿ
ರೇಣುಕಾ ಹೆಳವರ
ಡಾ. ಟಿ ಎಂ ಉಷಾರಾಣಿ

ಸ್ಪಂದನ : ಡಾ. ಎಸ್. ಜಿ. ಸಿದ್ಧರಾಮಯ್ಯ

ಸಂಯೋಜನೆ: ಅಶೋಕ್ ಶೆಟ್ಟರ

ರಾತ್ರಿ ೮.೦೦ ಸಾಂಸ್ಕೃತಿಕ ಕಾರ್ಯಕ್ರಮ
ಚಾಲನೆ - ಜನಾರ್ದನ್ (ಜನ್ನಿ)
ಕೇಸರಿ ಹರವೂ ನಿರ್ದೇಶನದ
’ನಗರ ಮತ್ತು ನದೀ ಕಣಿವೆ’ ಸಾಕ್ಷ್ಯಚಿತ್ರ ಪ್ರದರ್ಶನ

ಮಾರ್ಚ್ ೨೪, ಬೆಳಿಗ್ಗೆ ೯.೩೦ - ೧೦.೩೦

೫. ಹೊಸತಲೆಮಾರಿನ ಸಾಹಿತ್ಯ
ಕಾವ್ಯ

ತಾರಿಣಿ ಶುಭದಾಯಿನಿ
ಡಾ. ಎಚ್.ಎಸ್.ಅನುಪಮಾ

ಸ್ಪಂದನ - ಕೆ. ಪಿ. ಸುರೇಶ್ಸಂಯೋಜನೆ : ಜಗದೀಶ ಮಂಗಳೂರಮಠ

ಕತೆ:   ೧೦.೩೦ - ೧೧.೩೦.

ಮಂಜುನಾಥ್ ಲತಾ
ಮಹಾಂತೇಶ್ ನವಲಕಲ್

ಸ್ಪಂದನ:  ಎಸ್. ಗಂಗಾಧರಯ್ಯ
ಸಂಯೋಜನೆ : ಸುನಂದಾ ಕಡಮೆ

ಸಮಾಜ ವಿಜ್ಞಾನ ಬರೆಹ ಮತ್ತು ಸಂಸ್ಕೃತಿ ಚಿಂತನೆ: ೧೧.೩೦ - ೧೨.೩೦
ದೇವು ಪತ್ತಾರ
ಡಾ. ರಂಗನಾಥ ಕಂಟನಕುಂಟೆ

ಸ್ಪಂದನ: ಕೆ.ಫಣಿರಾಜ್ಸಂಯೋಜನೆ : ಡಾ. ಸಿದ್ರಾಮ ಕಾರಣಿಕ

೬ ಹೊಸ ತಲೆಮಾರು : ನಮ್ಮ ಗ್ರಹಿಕೆ ೧೨.೩೦-೨.೩೦
ಜಿ ಪಿ ಬಸವರಾಜು
ಡಾ. ನಟರಾಜ್ ಬೂದಾಳು
ಡಾ ಬಿ. ಎನ್. ಸುಮಿತ್ರಾಬಾಯಿ
ಡಾ. ಸಬಿಹಾ ಭೂಮಿಗೌಡ
ಕೆ. ನೀಲಾ

ಸಂಯೋಜನೆ: ಶಂಕರ ಹಲಗತ್ತಿ

೭ ಹೊಸ ಸಾಹಿತ್ಯ ಚಳುವಳಿಯ ಸಾಧ್ಯತೆ: ಮ. ೩.೩೦ - ೫.೩೦
ಡಾ. ಸಿದ್ಧನಗೌಡ ಪಾಟೀಲ್
ಡಾ. ವಿನಯಾ
ಡಾ. ಬಿ. ಎಂ ಪುಟ್ಟಯ್ಯ
ಡಾ. ರಹಮತ್ ತರೀಕೆರೆ

ಸಂಯೋಜನೆ: ಡಾ. ಕೆ ಆರ್ ದುರ್ಗಾದಾಸ

ಚಿತ್ರಕಲಾ ಪ್ರದರ್ಶನ

ನಮ್ಮೊಂದಿಗೆ:
ಹಸನ್‌ನಯೀಂ ಸುರಕೋಡ,   ಡಾ. ಎಚ್.ಟಿ. ಪೋತೆ,  ಡಾ.ಎಚ್ ನಾಗವೇಣಿ,  ರಾಮಚಂದ್ರ ಕುಲಕರ್ಣಿ,  ಹನಮಂತ ಹಾಲಗೇರಿ,  ಶಶಿಧರ ಹೆಮ್ಮಾಡಿ,  ಚಂದ್ರಕಾಂತ ಪೋಕಳೆ,  ಡಾ. ಶ್ರೀಶೈಲ್ ಹುದ್ದಾರ,  ಡಾ. ಸುಮಾ ಎಂಬಾರ್, ಸಂವರ್ಥ ಸಾಹಿಲ್,  ಡಾ. ಎಂ.ವಿ. ವಸು, ಕೆ.ಪಿ. ನಟರಾಜ, ಕೆ. ವೆಂಕಟೇಶ್, ನಾಮದೇವ ಕಾಗದಗಾರ, ಲಕ್ಷ್ಮೀಕಾಂತ ಮಿರಜಕರ, ದಾದಾಪೀರ್ ನವಲೇಹಾಳ್, ರಮೇಶ ಗಬ್ಬೂರ, ಡಾ. ಜಾಜಿ ದೇವೇಂದ್ರಪ್ಪ, ಬಿ.ಎಸ್.ಸೊಪ್ಪಿನ್, ಬಿ.ಆಯ್. ಇಳಿಗೇರ, ಮಹಾಂತೇಶ ಮಸ್ಕಿ, ಶ್ರೀದೇವಿ ಕೆರೆಮನೆ , ವೀರೇಶ ಸೌದ್ರಿ, ಶಿವಕುಮಾರ ಕಣಸೋಗಿ, ಎನ್, ಚಂದ್ರಶೇಖರ್, ಜಗನ್ನಾಥ ಮಾಸ್ತಿ, ವೈ.ಗ.ಜಗದೀಶ್, ಎಂ. ಎಫ್.ನದಾಪ, ಡಾ. ಸುನಂದಮ್ಮ, ಡಾ. ಸಬಿತಾ ಬನ್ನಾಡಿ, ಮಹಾಲಿಂಗಪ್ಪ ಅಲಬಾಳ್, ಸಿ.ಜಿ. ಹಿರೇಮಠ, ಸುರೇಶ ತಾಂಡೇಲ, ಮಾಧವಿ ಭಂಡಾರಿ, ಡಾ. ನಟರಾಜ ಹುಳಿಯಾರ್, ಸರಜೂ ಕಾಟಕರ, ಸತೀಶ ಕುಲಕರ್ಣಿ, ಡಿ.ಎಸ್.ಚೌಗಲೆ, ಭೀಮನಗೌಡ ಇಟಗಿ, ವಿಠ್ಠಪ್ಪ ಗೊರಂಟ್ಲಿ, ಡಾ. ಎ.ಎಸ್. ಪ್ರಭಾಕರ್, ಡಾ. ಎಚ್.ಡಿ. ಪ್ರಶಾಂತ್, ಡಾ. ರಾಜಪ್ಪ ದಳವಾಯಿ, ಶ್ರೀಪಾದ ಭಟ್, ಡಾ. ಗವಿಸಿದ್ದ ಪಾಟೀಲ, ಗವಿಸಿದ್ದ ಹೊಸಮನಿ, ಜಿ.ಎನ್.ಮೋಹನ್, ಬಸವರಾಜ ಕೆಂಚರಡ್ಡಿ, ಎಸ್.ಜಿ.ಚಿಕ್ಕನರಗುಂದ, ಜೆ. ಪಿ. ಶೆಟ್ಟಿ, ಸುಭಾಸ ರಾಜಮಾನೆ, ಡಾ. ವಿಠ್ಠಲ ಭಂಡಾರಿ, ಡಾ. ಮೀನಾಕ್ಷಿ ಬಾಳಿ, ಲಿಂಗಾರಡ್ಡಿ ಶೇರಿ, ಪ್ರಭು ಖಾನಾಪುರೆ, ಕಾಶೀನಾಥ ಅಂಬಲಗೆ, ಡಾ.ಎಚ್.ಬಿ.ಕೋಲ್ಕಾರ, ಲಕ್ಷ್ಮಣ ಕಾಪಸೆ, ಡಾ. ಮೈನುದ್ದೀನ ರೇವಡಿಗಾರ, ಡಾ. ಪ್ರಕಾಶ ಖಾಡೆ, ಶಿವಸುಂದರ, ಸತೀಶ್ ಶಿಲೆ, ವೀರಣ್ಣ ಮಂಟಾಳಕರ್, ಡಾ. ದಸ್ತಗೀರ್‌ಸಾಬ್ ದಿನ್ನಿ, ಮೇಟಿ ಕೊಟ್ರಪ್ಪ, ಹುಸೇನ್ ಪಾಶಾ, ಬಸವರಾಜ ಶೀಲವಂತರ್, ರಮೇಶ ನಾಯಕ, ಎಂ. ಚಂದ್ರಪ್ಪ, ಡಾ. ಆಂಜನಪ್ಪ, ವಿರುಪಾಕ್ಷಪ್ಪ ಪಡಿಗೋದಿ, ಸದಾನಂದ ಮೋದಿ, ಪ್ರಮೋದ ತುರ್ವಿಹಾಳ, ಡಾ. ವೈ.ಎಂ.ಭಜಂತ್ರಿ, ಡಾ. ಎಲ್.ಆರ್ ಅಂಗಡಿ, ಡಾ. ವೈ ಬಿ ಹಿಮ್ಮಡಿ, ಪಾರ್ವತೇಶ್,
ಮುಂತಾದ ಹಿರಿಯರು ಮತ್ತು ಕಿರಿಯರು
ಬನ್ನಿ, ಗೆಳೆಯರ ಜತೆಗೆ..
 

ಸೋಮವಾರ, ಮಾರ್ಚ್ 11, 2013

ಕರ್ನಾಟಕ ಜನಸಾಹಿತ್ಯ ಸಮಾವೇಶ



  

ಪ್ರಿಯರೆ

ಇದು ಜನಸಾಮಾನ್ಯರ ಬಳಿಗೆ ಸಾಹಿತ್ಯವನ್ನು ಒಯ್ಯಬಹುದಾದ ಆಶಯದ ನೆಲೆಯಲ್ಲಿ ಹುಟ್ಟಿಕೊಂಡ ಒಂದು ಸಮಾನಾಸಕ್ತರ ಬಳಗದ ಆಲೋಚನ ಕ್ರಮ.  ಈ ಆಲೋಚನ ಕ್ರಮ ಇಂತದ್ದೇ ಎನ್ನುವ ಸಿದ್ದ ನಿರೂಪಣೆಗಳಿಲ್ಲ. ಈ ಬಳಗ ಯೋಜಿಸುವ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಇದು ಒಂದು ಸ್ವರೂಪವನ್ನು ಪಡೆಯುತ್ತಾ ಹೋಗುತ್ತದೆ. ಈ ಚಟುವಟಿಕೆಯ ಮೊದಲ ಹಂತದ ಕಾರ್ಯಕ್ರಮ ಇದೇ ಮಾರ್ಚ 23,24 ರಂದು ದಾರವಾಢದಲ್ಲಿ ನಡೆಯಲಿದೆ. ಇಲ್ಲಿ ಸಮಾನಾಸಕ್ತ ಗೆಳೆಯ ಗೆಳತಿಯರೆಲ್ಲಾ ಒಂದೆಡೆ ಸೇರುತ್ತಿದ್ದಾರೆ. ಈ ಕಾರ್ಯ ಕ್ರಮದ ಪಟ್ಟಿಯನ್ನು ಇದೇ ಬ್ಲಾಗ್ ನಲ್ಲಿ ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು. ಇಲ್ಲಿ ಕರ್ನಾಟಕ ಜನ ಸಾಹಿತ್ಯ ಸಮಾವೇಶ ಎಲ್ಲಾ ಚಟುವಟಿಕೆಗಳು ಪ್ರಕಟವಾಗುತ್ತಾ ಹೋಗುತ್ತ ವೆ. ದಯವಿಟ್ಟು ಗಮನಿಸಿ

-ಅರುಣ್ ಜೋಳದಕೂಡ್ಲಿಗಿ

ಜನತೆಯತ್ತ ಸಾಹಿತ್ಯ ಬಳಗದ ಪರವಾಗಿ.

.